ಗೋಡ್ಸೆ ಹೀರೋ ಅಲ್ಲ ಎಂದ ಆರೆಸ್ಸೆಸ್ ಚಿಂತಕ

ಮಹಾತ್ಮ ಗಾಂಧಿ ಅವರನ್ನು ಕೊಂದ ನಾಥುರಾಂ ಗೋಡ್ಸೆ ಹೀರೋ ಆಗಲು ಸಾಧ್ಯವಿಲ್ಲ ಎಂದು ಆರೆಸ್ಸೆಸ್ ಚಿಂತಕ...
ನಾಥುರಾಂ ಗೋಡ್ಸೆ- ಮಹಾತ್ಮ ಗಾಂಧಿ
ನಾಥುರಾಂ ಗೋಡ್ಸೆ- ಮಹಾತ್ಮ ಗಾಂಧಿ
Updated on
ನಾಗ್ಪುರ: ಮಹಾತ್ಮ ಗಾಂಧಿ ಅವರನ್ನು ಕೊಂದ ನಾಥುರಾಂ ಗೋಡ್ಸೆ ಹೀರೋ ಆಗಲು ಸಾಧ್ಯವಿಲ್ಲ ಎಂದು ಆರೆಸ್ಸೆಸ್ ಚಿಂತಕ ಎಂ.ಜಿ.ವೈದ್ಯ ಹೇಳಿದ್ದು, ಆತನ 66ನೇ ಜನ್ಮದಿನವನ್ನು `ಶೌರ್ಯದಿವಸ' ಎಂದು ಆಚರಿಸುತ್ತಿರುವುದಕ್ಕಾಗಿ ಹಿಂದೂ ಮಹಾಸಭಾ, ಹಿಂದೂ ಸೇನಾ, ಮಹಾರಾಣ ಪ್ರತಾಪ್ ಸಂಘಟನೆಗಳನ್ನು ಟೀಕಿಸಿದ್ದಾರೆ. 
ಗೋಡ್ಸೆಗೆ ಗೌರವ ಸಲ್ಲಿಸುವುದನ್ನು ನಾನು ವಿರೋಧಿಸುತ್ತೇನೆ. ಆತ ಕೊಲೆಗಾರ. ಚಿಂತನೆಯ ಹೋರಾಟಗಳು ಚಿಂತನೆಯಲ್ಲೇ ನಡೆಯಬೇಕು. ಗೋಡ್ಸೆಯಂತೆ ಯಾರನ್ನಾದರೂ ಕೊಲ್ಲುವುದು ಸರಿಯಾದುದಲ್ಲ. 
ಗಾಂಧಿಯ ಕೊಲೆಯಿಂದ ಹಿಂದುತ್ವ ಬಲಪಡಿಸಲಾಯಿತೆಂದು ಕೆಲವರು ಭಾವಿಸಿರಬಹುದು. ಆದರೆ ಅದು ತಪ್ಪು. ಬದಲಾಗಿ ಅವರು ಹಿಂದುತ್ವವನ್ನು ಅವಮಾನಿಸಿದ್ದಾರೆ ಎಂದು ವೈದ್ಯ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com