ನಾಗ್ಪುರ: ಮಹಾತ್ಮ ಗಾಂಧಿ ಅವರನ್ನು ಕೊಂದ ನಾಥುರಾಂ ಗೋಡ್ಸೆ ಹೀರೋ ಆಗಲು ಸಾಧ್ಯವಿಲ್ಲ ಎಂದು ಆರೆಸ್ಸೆಸ್ ಚಿಂತಕ ಎಂ.ಜಿ.ವೈದ್ಯ ಹೇಳಿದ್ದು, ಆತನ 66ನೇ ಜನ್ಮದಿನವನ್ನು `ಶೌರ್ಯದಿವಸ' ಎಂದು ಆಚರಿಸುತ್ತಿರುವುದಕ್ಕಾಗಿ ಹಿಂದೂ ಮಹಾಸಭಾ, ಹಿಂದೂ ಸೇನಾ, ಮಹಾರಾಣ ಪ್ರತಾಪ್ ಸಂಘಟನೆಗಳನ್ನು ಟೀಕಿಸಿದ್ದಾರೆ.
ಗೋಡ್ಸೆಗೆ ಗೌರವ ಸಲ್ಲಿಸುವುದನ್ನು ನಾನು ವಿರೋಧಿಸುತ್ತೇನೆ. ಆತ ಕೊಲೆಗಾರ. ಚಿಂತನೆಯ ಹೋರಾಟಗಳು ಚಿಂತನೆಯಲ್ಲೇ ನಡೆಯಬೇಕು. ಗೋಡ್ಸೆಯಂತೆ ಯಾರನ್ನಾದರೂ ಕೊಲ್ಲುವುದು ಸರಿಯಾದುದಲ್ಲ.
ಗಾಂಧಿಯ ಕೊಲೆಯಿಂದ ಹಿಂದುತ್ವ ಬಲಪಡಿಸಲಾಯಿತೆಂದು ಕೆಲವರು ಭಾವಿಸಿರಬಹುದು. ಆದರೆ ಅದು ತಪ್ಪು. ಬದಲಾಗಿ ಅವರು ಹಿಂದುತ್ವವನ್ನು ಅವಮಾನಿಸಿದ್ದಾರೆ ಎಂದು ವೈದ್ಯ ಹೇಳಿದ್ದಾರೆ.